Saturday, November 7, 2009

ನೆನಪುಗಳ ಸಂಭ್ರಮಕೆ ನಿನ್ನ ನೆನಪೇ ಸಂಭ್ರಮ.....

ಮಿಲೇ ಸುರ್ ಮೆರ ತುಮ್ಹಾರ ಭೀಮಸೇನ್ ಜೋಷಿ ,ಅಮಿತಾಬ್,ಶಬಾನ ಅಜ್ಮಿ , ಎಲ್ಲರನ್ನು ಮುಂಗಾರು ಮಳೆಯಂತೆ ನೆನೆಸುತ್ತೆ. ೧೦ ವರ್ಷಗಳ ಹಿಂದೆ ದೂರದರ್ಶನದಲ್ಲಿ ನೋಡಿದ್ದ ಹೃದಯನ್ತರಳದಲಿ ಅಡಗಿರುವ ನೋವುಗಳು ನುರುಂಟು ನನ್ನ ನಲ್ಲ ಪರಿಸರ ಕಾಳಜಿಯ ಗೀತೆಗಳು, ಬೇಂದ್ರೆಯವರ ಒಂದೇ ಬಾರಿ ನನ್ನ ನೋಡಿ ಯಾ ಆ ಹುಡುಗಿ ಬಿಂದಿಗೆ ಹಿಡಿದು ನದಿ ಬಳಿ ಕನವರಿಸಿದ್ದು , ರೈಲು ಕಥೆಯನು ಹೇಳಿದ ಆ ಕೊರವಂಜಿ, ಕುವೆಂಪುರವರ ಮಲೆಗಳಲಿ ಮದುಮಗಳು ವಿನ ಜಿಗಣೆ ಶಬ್ದ ತಲೆ ಮೇಲೆ ಚೀಲದಿಂದ ಮಾಡಿದ ಹೊದಿಕೆ ಹಾಕಿಕೊಂಡು ಹೋಗುತಿದ್ದ ಮಂದಿ ಆ ಸೌಂದರ್ಯ ಸವಿಯಲು ಮನೆಯ ಎಲ್ಲ ದೀಪವನ್ನು ಆರಿಸಿ ಕತ್ತಲಲಿ ಅದನ್ನ ಮನತುಂಬಿ ನಕ್ಕಿ,ಆಶ್ಚರ್ಯದಿಂದ ನೋಡಿ ಮನದ ಮುಲೆಯೊಳಗೆ ಹೋಗಿ ಬಾಗಿಲು ಮುಚಿಕೊಂಡಿದ್ದು, ಬಡವರ ಬುಧವಾರದ ಚಿತ್ರಹಾರ್ ,ಭಾನುವಾರದ ರಂಗೋಲಿ, ಪ್ರಾಣಿಗಳೊಂದಿಗೆ ಓಡುತ್ತ ಬೆಟ್ಟದಿಂದ ಹಾರುತಿದ್ದ ಮೊಗ್ಲಿ ,ಮಹಾಬಾರತ, ಮಂಗಳವಾರ ಬರುತ್ತಿದ್ದ ಚಂದ್ರಕಾಂತ ಕಾಡುವಿಕೆಗೆ ಇಷ್ಟು ಸಾಕಲ್ಲವೇ? ಎಲ್ಲಿ ಜಾರಿತೋ ಮನಸ್ಸು ನೆನಪಾಗುತಿದೆ ಕತ್ತಲಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ಬಾಲೆ ಜಿ.ಎಸ.ಶಿವರುದ್ರಪ್ಪ ನವರ ಆ ಬಾಲೆಯನ್ತಗಿದೆ ನನ್ನ ಇ ಸ್ಥಿತಿ ಅದೇನೋ ಬೇಡವೆಂದರೂ ಮನಸು ಕಳೆದು ಹೋದದ್ದನ್ನೆ ನೆನೆದು ಆ ನೋವಿನಲ್ಲೇ ಏನೋ ಖುಷಿ ಪಡುತ್ತ್ತದೆ, ಈ ನೆನಪುಗಳೇ ಹೀಗ? ಇಲ್ಲ ಇ ಮನಸೇ ಹೀಗ? ಇಲ್ಲ ನಾವೇ ಹೀಗ? ನಮಗೇಕೆ ಬದಲಾವಣೆ ಅಷ್ಟು ಬೇಗ ರುಚಿಸುವುದಿಲ್ಲ ,ಮನಸ್ಸಿಗೆ ಗೊತ್ತು ನೆನಪುಗಳ ಸೌಂದರ್ಯ ಹೆಚ್ಚಾಗುವುದೇ ವಸ್ತು ಹೊಸತನ,ಬದಲಾವಣೆಗೆ ತನ್ನ ಒಡ್ಡಿಕೊಂದಾಗಲೇ ಎಂದು, ಬದಲಾವಣೆಯ ಹೊಸ ಹಾದಿಯೊಂದಿಗೆ ನೆನಪಿನ ಬುತ್ತಿ ತೆಗೆದುಕೊಂಡು ಹೋಗುವುದ ಮರೆತರೆ ಮುಂದಿನ ಪ್ರಯಾಣಕ್ಕೆ ಚೈತನ್ಯ ಇರುವುದಿಲ್ಲ,ಅರ್ಥವೂ ಇರುವುದಿಲ್ಲ.ಹೌದು ಈ ಬದಲಾವಣೆ ಏಕೆ?ಎಂಥಹ ಬದಲಾವಣೆ? ಅಗತ್ಹ್ಯವ?ಅಯ್ಯೋ ದೇವ್ರೇ ಇದೆಲ್ಲೆಲ್ಲೋ ಹೋಗ್ತ್ಹಿದ್ಯಲ್ಲ ಇದೆಲ್ಲ ಬುದ್ದಿ ಜೀವಿಗಳ ಮಂತ್ರ ನಂಗೆ ಗೊತ್ತಿಲ್ಲ ಅದರ ತಂತ್ರ .ಹ ಅಲ್ಲಿದೆ ನನ್ನ ನೆನಪುಗಳು ಹೇ ನಿಲ್ಲಿ ಎಲ್ಲಿ ಹೋಗ್ತ್ಹಿದಿರ ನ ನಿಮ್ಮೊದಿಂಗೆ ಬರುತ್ತಿದೇನೆ.......